shruthi

shruthi

Friday 6 April 2012

ಕಡೆಗೆ ನಿನ್ನ ಜಾತಿಗಾದರು ನ್ಯಾಯ ಮಾಡು ಮಾನವ!!!

ಮನದ ಕೊಳೆಯ ತೊಳೆವ
ಮಡಿವಾಳ,
ತೊರೆದ ಮನಸುಗಳ ಹೊಲೆಯುವ
ದರ್ಜಿ ,

ಅಂದದ ಆಲೋಚನೆಗಳ ಹದ ಮಾಡಿ
ರೂಪ ಕೊಡುವ ಕುಂಬಾರ,
ಆತ್ಮಕ್ಕೆ ಲಿಂಗವನ್ನು ಧರಿಸಿ
ಪೂಜಿಸುವ ಜಂಗಮ,

ಅಕ್ಷರ ಜ್ಞ್ಯಾನ ದಾನ ಮಾಡುವ
ಬ್ರಾಹ್ಮಣ,
ಸ್ನೇಹ,ಪ್ರೀತಿಯನ್ನು ಕೊಡು ಕೊಳ್ಳುವ
ವೈಶ್ಯ ,
ಅರಿಷಡ್ವರ್ಗಗಳೊಂದಿಗೆ ಹೋರಾಡುವ
ಕ್ಷತ್ರಿಯ,
ಅಸಾಹಯಕರ ಸೇವೆಗೈಯುವ
ಶೂದ್ರ ,
ದುಶ್ಚಟ ಮತ್ತು ದುರಾಲೋಚನೆಗಳಿಗೆ
ಅಸ್ಪೃಶ್ಯನಾಗಿ
ಕಡೆಗೆ ನಿನ್ನ ಜಾತಿಗಾದರು ನ್ಯಾಯ ಮಾಡು ಮಾನವ!!!
-ಶ್ರುತಿ